ಕರ್ನಾಟಕ ಕ್ರೈಸ್ತ ಸಂಘಟನೆ ಎಚ್ಚರಿಕೆ!
ಹಿಂದೂ ಸಂಘಟನೆಗಳ ಸುಳ್ಳು
ಆಪಾದನೆಗಳ ವಿರುದ್ಧ ಸೂಕ್ತ ಕ್ರಮ
ಇತ್ತೀಚಿಗೆ ಕ್ರೈಸ್ತ ಸಮುದಾಯಗಳ ನಿಸ್ವಾರ್ಥ ಸೇವೆಗಳನ್ನು ಸಹಿಸಲಾರದ ಹಿಂದೂ ಸಂಘಟನೆಗಳ ಆಮಿಷ ಮತ್ತು ಮತಾಂತರ ಎಂಬ ಸುಳ್ಳು ಆಪಾದನೆ ವಿರುದ್ಧ ಮತ್ತು ದೌರ್ಜನ್ಯ ನಡೆಸುವುದು ಅತಿಕ್ರಮಣ, ಅಡ್ಡಿಪಡಿಸುವುದು ತೊಂದರೆ ಮಾಡುವುದು ಇಂತಹ ಅನ್ಯಾಯಗಳ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳಲಾಗುವುದೆಂದು ಕರ್ನಾಟಕ ಕ್ರೈಸ್ತ ಸಂಘಟನೆ ಎಚ್ಚರಿಕೆ ನೀಡಿದೆ
ರಾಜ್ಯದಲ್ಲಿ ಇತ್ತೀಚಿಗೆ ಹಿಂದೂ ಸಂಘಟನೆಗಳು ಇವರ ಸ್ವಾರ್ಥ ಚಿಂತನೆಯುಳ್ಳ ಕುತಂತ್ರಗಳಿಂದ ನಡೆಯುತ್ತಿರುವ ಸಹಿಸಲಾರದ ಸುಳ್ಳು ಆಪಾದನೆ, ತಪ್ಪು ಮಾಹಿತಿ, ಆಮಿಷ ಮತಾಂತರ ಎಂಬ ಸುಳ್ಳು ಸಂದೇಶಗಳ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ದಕ್ಕೆ ತರುವ ಮತ್ತು ಕುಯುಕ್ತಿ ನಡೆಸುತ್ತಿರುವ ಅನ್ಯಾಯ ದೌರ್ಜನ್ಯ ಖಂಡಿಸಿ ಹಾಗೂ ಸೂಕ್ತ ಕ್ರಮ ಕೈಕೊಳ್ಳಲಾಗುವುದೆಂದು ಕರ್ನಾಟಕ ಕ್ರೈಸ್ತ ಸಂಘಟನೆ ಎಚ್ಚರಿಕೆ ನೀಡಿದೆ
ಇಂತಹ ಅನ್ಯಾಯ ದೌರ್ಜನ್ಯ ಕೋಮುಗಲಭೆ ಸೃಷ್ಟಿಸುವ ಸುಳ್ಳು ಮತ್ತು ತಪ್ಪು ಸಂದೇಶ ನೀಡುವುದು ಸಾಮರಸ್ಯಕ್ಕೇ ದಕ್ಕೆ ತರುವುದು ಅಕ್ಷಮ್ಯ ಅಪರಾಧ ಎಂದು ಕರ್ನಾಟಕ ಕ್ರೈಸ್ತ ಸಂಘಟನೆ ಆಕ್ರೋಶ ವ್ಯಕ್ತ ಪಡಿಸಿದೆ
ಸುಳ್ಳು ಆಪಾದನೆ ಸಾಮಾಜಿಕ ಸಾಮರಸ್ಯಕ್ಕೇ ದಕ್ಕೆ ತರುವ ಹಿಂದೂ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಕ್ರೈಸ್ತ ಸಂಘಟನೆ ತಿಳಿಸಿದೆ
ಧಾರ್ಮಿಕ ಸೇವೆಗಳಿಗೆ ಅಡ್ಡಿಪಡಿಸುವುದು ದೊಡ್ಡ ಅಪರಾಧ
ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳನ್ನು ಪ್ರತಿಯೊಬ್ಬ ಮಾನವನಿಗೆ ಕೊಟ್ಟಿದೆ ಯಾವುದೇ ವ್ಯಕ್ತಿ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳುವುದು ಸಹ ಮಾನವ ಹಕ್ಕುಗಳ ಉಲ್ಲಂಘನೆ ಯಾಗಿದೆ
ಪ್ರಜಾಪ್ರಭುತ್ವ ಸ್ವತಂತ್ರ ದೇಶದಲ್ಲಿ ಒಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವ ಹಕ್ಕಿನಂತೆ ತನಗಿಷ್ಟವಾದ ಧರ್ಮಪಾಲನೆ, ತನಗಿಷ್ಟವಾದ ಧಾರ್ಮಿಕ ತತ್ವ ಸಿದ್ಧಾಂತಃ ಗಳನ್ನೂ ಪರಿಪಾಲಿಸುವ ಮತ್ತು ಅಂತಹ ಶ್ರೇಷ್ಠ ಸಿದ್ಧಾಂತ ಗಳನ್ನು ಬೇರೆಯವರಿಗೂ ತಿಳಿಸುವ,ಆಚರಣೆಯನ್ನು ಕೈಕೊಳ್ಳುವ ಮತ್ತು ಇತರರಿಗೆ ಹೇಳಿಕೊಡುವ ಅಲ್ಲದೇ ಅವುಗಳನ್ನು ಪರಿಪಾಲಿಸಿಕೊಂಡು ಹೋಗುವ ಅಧಿಕಾರ, ಸ್ವಾತಂತ್ರ್ಯ, ಮಾನವ ಹಕ್ಕುಗಳು ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಅನುಚ್ಚೆಧ 25 -28 ಅಲ್ಲದೇ 42ರ ತಿದ್ದುಪಡಿಯ ಅಧಿನಿಯಮ 1976ಪ್ರಕಾರ ಸರ್ಕಾರವು ಜಾತ್ಯತೀತತೆ ಸಿದ್ಧಾಂತ ಪ್ರಕಾರ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲ ವಿಶೇಷವಾಗಿ "ಆರಾಧನಾ ಹಕ್ಕು" ಮನುಷ್ಯನಿಗೆ ದೇವರಿಂದ ಕೊಡಲ್ಪಟ್ಟಿದೆ ಹೊರತು ಹಿಂದೂ ಸಂಘಟನೆಗಳಿಂದಲ್ಲ ಮತ್ತೂ ಸರಕಾರಗಳಿಂದಲ್ಲ ಎನ್ನುವುದು ಇನ್ನು ಮುಂದೆ ಅರ್ಥ ಮಾಡಿಕೊಂಡು ಹೋಗಬೇಕು ಎಂದು ಕರ್ನಾಟಕ ಕ್ರೈಸ್ತ ಸಂಘಟನೆ ಹಿಂದೂಪರ ಸಂಘಟನೆಗಳಿಗೆ ತಿಳುವಳಿಕೆ ನೀಡಿದೆ
ಇಂತಹ ಹಕ್ಕುಗಳಿಗೆ ಚ್ಯುತಿ ತರುವ ದುಷ್ಟ ದೌರ್ಜನ್ಯ ಕಾರ್ಯಗಳು ಅಪರಾಧವಾಗುತ್ತವೆ ಮತ್ತೂ ಇಂತಹ ಕೋಮುವಾದಿ ವಿಷ ಬಿತ್ತಿ ಸಾಮರಸ್ಯ ಹಾಳು ಮಾಡಲು ಹೊರಟಿರುವ ಮತ್ತೂ ತೊಂದರೆ ಪಡಿಸುವುದು ಅಡ್ಡಿಪಡಿಸುವುದು ಅತಿಕ್ರಮಣ ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಲ್ಲ ಹಿಂದೂ ಸಂಘಟನೆಗಳಿಗೆ ಎಚ್ಚರಿಕೆ ಕೊಟ್ಟಿದೆ
ಒಬ್ಬ ಮತಾಂತರ ಹೊಂದಲು ಕೇವಲ ಸರಕಾರಿ ಕೋರ್ಟ್, ಡಿಸಿ, ತಹಸೀಲ್ದಾರ್ ಮೂಲಕವೇ ಮಾತ್ರ ಸಾಧ್ಯ ಹೊರತು ಕ್ರಿಸ್ತನ ಧಾರ್ಮಿಕ ಸೇವಕರಿಂದ ಸಾಧ್ಯವಿಲ್ಲ ಎನ್ನುವುದು ಮತ್ತು ಇಂತಹ ಆಪಾದನೆಗಳು ಕೇವಲ ಹಿಂದೂ ಸಂಘಟನೆಗಳ ಸುಳ್ಳು ಹಾಗೂ ತಪ್ಪು ಅಪರಾಧಿ ಕೃತ್ಯಗಳು ಎನ್ನುವುದು ಸಮಾಜ ತಿಳಿದುಕೊಳ್ಳಬೇಕು ಎಂದು ಮನವರಿಕೆ ಮಾಡಿದೆ ಕರ್ನಾಟಕ ಕ್ರೈಸ್ತ ಸಂಘಟನೆ
ಪ್ರತಿ ಮಾನವ ತನ್ನ ಇಚ್ಛೆಯಂತೆ ತನಗಿಷ್ಟವಾದ ದೈವಿಕ ಶಕ್ತಿಯನ್ನು ಆರಾಧಿಸಲು ಸ್ವತಂತ್ರ ಹಕ್ಕನ್ನು ಹೊಂದಿರುತ್ತಾನೆ ಮತ್ತು ತನ್ನ ಆತ್ಮ ಕ್ಕೇ ಮುದ ನೀಡುವ ಸಮಾಧಾನ ಕೊಡುವ ನಿಜವಾದ ಹಾಗೂ ಸತ್ಯ ದೇವರಲ್ಲಿ ನಂಬಿಕೆಯಿಂದ ನಡೆಯುತ್ತ ದಿವ್ಯ ಜ್ಞಾನ ಶಕ್ತಿಯನ್ನು ಪಡೆದುಕೊಂಡು ಮುಕ್ತಿ ಮೋಕ್ಷದ ಸದ್ಗುರುವಿನ ಸಾಕ್ಷಾತ್ಕಾರ ಪಡೆಯಲು, ವಿಶೇಷವಾಗಿ ತನ್ನ ಜೀವಿತದಲ್ಲಿ ಆದ ಮೋಸಕ್ಕೂ ಮೇಲ್ವರ್ಗದ ತುಳಿತ, ಮೌಢ್ಯತೆಯಿಂದ ಮಿತ್ಯ ಮಾರ್ಗ ತೊರೆದು ಸತ್ಯದ ಅನ್ವೇಷಣೆ ನಡೆಸಿ ಸತ್ಯ ಜೀವ ಮಾರ್ಗವಾಗಿರುವ ಆದ್ಯಾತ್ಮದ ಒಳ ಅರಿವು ಪಡೆದುಕೊಂಡು ಜಗತ್ ಸೃಷ್ಟಿಕರ್ತನೂ ಜಗತ್ ಪರಿಪಾಲಕನೂ ಪರಿಪೂರ್ಣನೂ ಮಾನವ ಕುಲದ ಉದ್ದಾರಾಕನೂ ಜಗತ್ತಿನ ಸಮಸ್ತ ಶಾಸ್ತ್ರ ಗ್ರಂಥ ಗಳಲ್ಲಿ ಸಾಕ್ಷಾಧಾರನೂ ಮಾನವನ ಪಾಪ ಪರಿಹಾರಕನೂ ಸರ್ವ ಶ್ರೇಷ್ಠ ನೂ ಆಗಿರುವ ದೇವರು ಯೇಸು ಕ್ರಿಸ್ತನ ಮಹಿಮೆಯನ್ನು ಆತನ ಅದ್ಭುತವಾದ ಶಕ್ತಿಯನ್ನು ಆಂತರ್ಯದಲ್ಲಿ ಸಾಕ್ಷಾತ್ಕಾರ ಹೊಂದಿಕೊಂಡ ಮಾನವ ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನೆಡೆಗೆ ತನ್ನನ್ನು ನಡೆಸಿಕೊಂಡು ಹೋಗುವಾಗ ತನಗೆ ಸಂಭಂದವೇ ಇಲ್ಲದ ಅವಶ್ಯಕತೆಯೂ ಇಲ್ಲದ ಯಾವುದೇ ಒಬ್ಬ ವ್ಯಕ್ತಿ ಅಥವಾ ಹಿಂದೂ ಸಂಘಟನೆ ನೀನು ಇದನ್ನು ಮಾಡಬೇಡ ಇದನ್ನು ಮಾಡು ಇದನ್ನು ತಿನ್ನಬೇಡ ಇದನ್ನು ತಿನ್ನು ಅಲ್ಲಿ ಹೋಗಬೇಡ ಇಲ್ಲಿಯೇ ಹೋಗು ಎನ್ನುತ್ತಾ ಮತ್ತೊಬ್ಬರ ಹಕ್ಕನ್ನು ಕಸಿದುಕೊಳ್ಳುವುದು ದೊಡ್ಡ ಅಪರಾಧ ಮತ್ತು ಅಷ್ಟೇ ದ್ರೋಹ ಎನ್ನುವ ಅರಿವು ಇರಬೇಕು
ಇದಲ್ಲದೆ ಸತ್ಯ ಮಾರ್ಗ ಕಂಡುಕೊಂಡ ಒಬ್ಬ ಮಾನವ ಇಂತಹ ವ್ಯಕ್ತಿ ಅಥವಾ ಹಿಂದೂ ಸಂಘಟನೆಯವರು ಬಂದು ಕೇಳಿದಾಗ ಸುಮ್ಮನೆ ನಿಲ್ಲದೆ ನನಗಿಷ್ಟವಾದ ಯಾವುದೇ ಆಮಿಷ ಅಥವಾ ಒತ್ತಡ ಇಲ್ಲದೇ ನನ್ನೀಚ್ಚೆಯ ದೇವರ ಕೃಪೆ ಹೊಂದಿಕೊಂಡು ನೆಮ್ಮದಿಯಿಂದ ಜೀವಿಸುತ್ತಿದ್ದೇನೆ ನನ್ನ ಸ್ವಂತ ಜೀವನದ ಮೌಲ್ಯಗಳನ್ನು ಪ್ರಶ್ನಿಸಲು ನೀನ್ಯಾರು ಅಥವಾ ನೀವ್ಯಾರು ಎಂದು ಬಾಯಿತೆರೆದು ಪ್ರತಿ ವಿಶ್ವಾಸಿಗಳೂ ಇನ್ನು ಮಾತಾಡುವುದನ್ನು ರೂಡಿಸಿಕೊಳ್ಳಬೇಕು

23 Comments
Glory to God
ReplyDeleteಅವರಿಗೆ ತಕ್ಕ ಪಾಠ ಕಲಿಸಬೇಕು
ReplyDeleteಕೈಸ್ತರು ಶಾಂತಿಪ್ರಿಯರು ವಿರುದ್ಧವಾಗಿ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು
ReplyDeleteWe are support you brother
ReplyDeleteSupport you
ReplyDeleteಕರ್ನಾಟಕ ಕ್ರೈಸ್ತ ಸಂಘಟನೆ ಮಾಡುವ ಕಾರ್ಯಗಳಿಗೆ ನಮ್ಮ ಬೆಂಬಲವಿದೆ
ReplyDeleteಸತ್ಯ ತಿಳಿದುಕೊಳ್ಳುವುದು ಆದರೆ ಸತ್ಯ ಬಿಡುಗಡೆ ಮಾಡುವುದು ಸುಳುನಿಂದ ಯಾವ ಸತ್ಯ ಹೊರಡುವುದಿಲ್ಲ ಆದರೆ ಸತ್ಯದಿಂದ ಮುಂದೆ ಸುಳು ಬಾಗುತ್ತದೆ ಕೊನೆಗೆ ಸತ್ಯಕ್ಕೆ ಜಯಸಿಗುತದೇ
ReplyDeleteSupport you
ReplyDeleteಕರ್ನಾಟಕದಲ್ಲಿ ನಿಮ್ಮ ಸೇವೆ ದೊಡ್ಡದು ನಾವು ನಿಮಗಾಗಿ ಪ್ರಾರ್ಥಿಸುತ್ತೇವೆ
ReplyDeleteKaanunina mulakavaagiye naavu horata maadi christha sangatanegalannu bala padisbeku bro sathyakke solilla devaru Nam kade idre nammanu yedurisuvavvaru yaaru?
ReplyDeleteWe are support you brother God is vith you
ReplyDeleteSupport yoh sir
ReplyDeleteGod bless you brother
ReplyDeleteAppreciate you
ReplyDeleteChristians are peace keepers and their contributions toward our nation is innumerable. This is a good statement every church and saint should support this I support you. Thanks
ReplyDeleteChristians are peace keepers and their contributions toward our nation is innumerable. This is a good statement every church and saint should support this I support you. Thanks
ReplyDeletepraise the lord brother ಕ್ರೀಸ್ತರ ಸೇವೆ ಮಾಡೊ ನೀಮಗೆ ಸದಾ ನನ್ನ ಬೆಂಬಲವಿದೆ ನಾವೊ ಪ್ರಾರ್ಥನೆ ಮಾಡುತಿವಿ brorther god bless you a
ReplyDeleteನಿಮ್ಮ ಸೇವೆಗೆ ಧನ್ಯವಾದಗಳು
ReplyDeleteಅಣ್ಣ ಇವರಿಗೆ ತಕ್ಕ ಪಾಠ ಕಲಿಸ ಬೇಕು ಸುಮ್ನೆ ಬಿಡಬಾರದು
ReplyDeleteWe support you
ReplyDeleteWe r with ,do what God leads you ...
ReplyDeleteWe support you. Praise the Lord
ReplyDeleteದೂರು ನೀಡಬೇಕು
ReplyDelete